°
, May 13, 2024 in
Breaking News
PoliticsTop Stories
0

ಜಲ ದೀಪಾವಳಿ ಉದ್ಘಾಟಿಸಿದ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು : ಇಂದು ಅಮೃತ್ 2.0 ಕಾರ್ಯಕ್ರಮದಡಿ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಡೆದ ಕೇಂದ್ರ ಸರಕಾರದ ಜಲ ದೀಪಾವಳಿ ಮಹಿಳೆಯರಿಗಾಗಿ ನೀರು ನೀರಿಗಾಗಿ ಮಹಿಳೆಯರು ಎಂಬ ವಿನೂತನ ಕಾರ್ಯಕ್ರಮವನ್ನು ಇಂದು ದ.ಕ. ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.

ಆ ಬಳಿಕ ಮಾತನಾಡಿದ ಅವರು, ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು ಅಭಿವೃದ್ದಿಯ ನಾಗಾಲೋಟದಲ್ಲಿರುವ ಮಂಗಳೂರಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರೇರಣಾದಾಯಕ ವಿಷಯ ಎಂದರು.
ಮಂಗಳೂರು ಸ್ಮಾರ್ಟ್‌ಸಿಟಿ ಮತ್ತು ಅಮೃತ್ ಯೋಜನೆಯಂತಹ ಸೌಲಭ್ಯಗಳನ್ನು ಪಡೆದಂತಹ ನಗರವಾಗಿದೆ. ಇಂತಹ ನಗರದಲ್ಲಿ ನೀರಿನ ಬಗೆಗೆ ಜಾಗೃತಿ ಮೂಡಿಸಲು ಮನೆಯ ಅಮ್ಮಂದಿರಿಂದಲೇ ಮುನ್ನುಡಿಯನ್ನ ಬರೆಯುವ ಪಾಲಿಕೆಯ ಶ್ರಮಕ್ಕೆ ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಉಪಮೇಯರ್ ಸುನಿತಾ, ಪಾಲಿಕೆಯ ವಿರೋಧ ಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಇನ್ನಿತರ ಕಾರ್ಪೋರೇಟರ್‌ಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *